?ಮಾವಳ್ಳಿ ಮಿಲ್‌ಟ್ರಿ ಹೋಟೆಲ್? ಅಂತಿಮ ಹಂತಕ್ಕೆ
Posted date: 04 Wed, Apr 2012 ? 02:25:04 PM

ನಿರ್ಮಾಪಕ ಶೋಭಾ ರಾಜಣ್ಣ ’ಮಾವಳ್ಳಿ.............. ಚಿತ್ರಕ್ಕೆ ’ಬಾಬಾ’ ಹಾಗೂ ’ಈ ರಾಜೀವ್ ನಾನಲ್ಲ’ ಮತ್ತು ’ಡೆಡ್ಲಿ ಸೋಮ’ ನಂತರ ಕೈಗೆತ್ತಿಕೊಂಡಿರುವ ಮತ್ತೊಂದು ಮಾಸ್ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ಒಂದು ಸಾಹಸ ಸನ್ನಿವೇಶ ೨ ಹಾಡಿನ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಚೆನ್ನಾಗಿರುವ ಹುಡುಗರು ಸಹವಾಸ ದೋಷದಿಂದ ಹೇಗೆ ಹಾಳಾಗಿ ಹೋಗಿ ಪರಿತಪಿಸುತ್ತಾರೆ ಎಂಬುದೇ ಚಿತ್ರದ ಕಥಾವಸ್ತು.

ನಿರ್ದೇಶಕ ಶಶಾಂಕ್ ರಾಜ್ ’ಯುಗ ಯುಗಗಳೇ ಸಾಗಲಿ’ ನಂತರ ೧೭ ರಿಂದ ೨೩ ವಯಸ್ಸಿನ ಹುಡುಗರನ್ನು ದೃಷ್ಟಿಯಲ್ಲಿರಿಸಿಕೊಂಡು ಕತೆ ಹೆಣೆದಿದ್ದಾರೆ. ಒಂದು ಕೊಲೆಯ ಹಿಂದೆ ಹೋಗಿ ಯುವಕರ ಭೂಗತ ಜಗತ್ತಿಗೆ ಅಂಟಿಕೊಳ್ಳುವುದು ಈ ಚಿತ್ರದಲ್ಲಿದೆ.

ಚಿತ್ರದ ಕಥಾನಾಯಕ ಶ್ರೀಕಾಂತ್ ಹಾಗೂ ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದೊಡ್ಡಣ್ಣ, ಅವಿನಾಶ್, ಬುಲೆಟ್ ಪ್ರಕಾಶ್, ತಿಲಕ್, ತುಳಸಿ ಶಿವಮಣಿ, ಶೋಭರಾಜ್ ಪೋಷಕ ಕಲಾವಿದರು. ನಾಗೇಂದ್ರ ಸಂಕಲನ, ಅಭಿಮನ್ ರಾಯ್ ಸಂಗೀತ, ನವೀನ್ ಸುವರ್ಣ ಛಾಯಾಗ್ರಹಣ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed